ದಿನಾಂಕ 28th December 2021 ವಚನಾಂಕಿತ ಲಿಂಗದೇವ ಹಿಂದಕ್ಕೆ ಪಡೆದ ಕೊಡಲಸಂಗಮದ ಬಸವ ಧರ್ಮ ಪಿಠದ ಅಧ್ಯಕ್ಷರಾದ ಗಂಗಾಮಾತಾಜಿ. ಬಸವ ಅಭಿಮಾನಿಗಳು ಹಾಗು ಮಾತೆ ಮಹಾದೇವಿ ಅಭಿಮಾನಿಗಳಿಂದ ತಿವ್ರ ವಿರೋಧ.
ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ ಕೊಡಲಸಂಗಮದಲ್ಲಿ 2023, ಜನೆವರಿ ಯಲ್ಲಿ ನಡೆಯುತ್ತಿರು ಎರಡು ಶರಣಮೇಳದಲ್ಲಿ ಬಂದ ಶರಣರನ್ನು ಉದ್ದೇಶಿಸಿ ಮಾತನಾಡುತ್ತಾ.. ಪ್ರಸಾದ ಇಲ್ಲಿ ಮಾಡುತ್ತಾರೆ ಅಲ್ಲಿ ಕಾರ್ಯಕ್ರಮ ಭಾಗಿಯಾಗುತ್ತಾರೆ ಎಂಬ ಬಸವರಾಜ ಧನ್ನೊರ ಅವರ ಕೆಳಮಟ್ಟದ ಮಾತುಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಬಸವಾನುಯಾಯಿಗಳು ಕೊಡಲಸಂಗಮದಲ್ಲಿ ಹಣ ಕೊಟ್ಟು ರೊಂಮಗಳನ್ನು ಕಟ್ಟಿಸಿಕೊಂಡವರಲ್ಲಿ ಕೆಲವರಿಗೆ ರೊಂಮ ಬೀಗಳನ್ನು ಕೊಡದೆ ಅಮಾನವಿಯವಾಗಿ ವರ್ತಿಸಿದ್ದಾರೆ - ಇಂಥಹ ಘಟನೆಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಪವಿತ್ರವಾದ ಶರಣಮೇಳದ ವೇದಿಕೆ, ಅವಹೆಳನಕಾರಿ ಮಾತುಗಳಿಂದ, ಟಿಕೆಗಳಿಂದ ತುಂಬಿರುವುದನ್ನು ಕಂಡು ಬಸವಾನುಯಾಯಿಗಳು ನೊಂದಿದ್ದಾರೆ . ಪವಿತ್ರವಾದ ವೇದಿಕೆ ಧರ್ಮಪ್ರಚಾರಕ್ಕೆ ಮಾತ್ರ ಉಪಯೊಗಿಸಿಕೊಳ್ಳಿ. ಪೂಜ್ಯ ಚನ್ನಬಸವಾನಂದ ಸ್ಮಾಮಿಜಿಯರ ಸ್ಪಷ್ಟಿಕರಣ
ಒಂದು ಕಡೆ ಗುರು ಬಸವಣ್ಣನವರನ್ನು ಕೂಡಲಸಂಗಮದೇವನ ಆರಾಧಕರನ್ನಾಗಿ ಮಾಡಿ, ಗುರು ಬಸವಣ್ಣನವರನ್ನು ಹಿಂದುತ್ವದಲ್ಲಿ ವೀರಶೈವದಲ್ಲಿ ಸಮಾಗಮ ಮಾಡಿ, ಕನ್ಹೇರಿ ಸ್ವಾಮಿಯವರ ಬಸವಾದಿ ಶರಣರ ಹಿಂದೂ ಸಮಾವೇಶದ ವಿರೋಧ ಮಾಡಿ ಬಸವ ಭಕ್ತರಿಗೆ ಮೋಸ ಮಾಡುತ್ತಿರುವವರ ಬಗ್ಗೆ ಎಚ್ಚರವಿರಲಿ. ಕನ್ಹೇರಿಯ ಕಾಡಸಿದ್ದೇಶ್ವರ ಸ್ವಾಮಿಯವರು ಬಸವಾದಿ ಶರಣರ ಹಿಂದೂ ಸಮಾವೇಶ ಮಾಡಲು ಮೂಲ ಕಾರಣ ಕರ್ತರಾದವರೆ ಅವರ ಬಸವ ಕಲ್ಯಾಣದ ಕಾರ್ಯಕ್ರಮವನ್ನು ವಿರೋಧಿಸುವ ನಾಟಕವಾಡುತ್ತಿರುವುದು ಬಸವ ಭಕ್ತರಿಗೆ ಮಾಡುತ್ತಿರುವ ಬಹುದೊಡ್ಡ ವಂಚನೆ. ಅರಿವುಳ್ಳ ಬಸವ ಭಕ್ತರು ಕನ್ಹೇರಿ ಕಾಡ ಸಿದ್ದೇಶ್ವರ ಸ್ವಾಮೀಜಿಯವರ ವಿರೋಧಿಸಿ ಸಮಯ ವ್ಯರ್ಥಮಾಡಯವ ಬದಲಿಗೆ. ತಮ್ಮ ತಮ್ಮ ಊರುಗಳಲ್ಲಿ ಗುರು ಬಸವಣ್ಣನವರ ತತ್ವಗಳನ್ನು ಗಟ್ಟಿಗೊಳಿಸಿ. ಇಷ್ಟಲಿಂಗದೀಕ್ಷೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಮಾಜದ ಎಲ್ಲಾ ಜನಾಂಗದವರಿಗೆ ಗುರು ಬಸವಣ್ಣನವರನ್ನು ತಲುಪಿಸುವ ಪ್ರಯತ್ನ ಮಾಡಿ. ಇದರಿಂದ ಗುರು ಬಸವಣ್ಣನವರ ತತ್ವಗಳನ್ನು ಉಳಿಸಬಹುದೇ ಹೊರತು ಕಾಡಸಿದ್ಧೇಶ್ವರ ಸ್ವಾಮಿಯನ್ನು ವಿರೋಧಿಸುವುದರಿಂದ ಅಲ್ಲ. ಕಾಡಸಿದ್ಧೇಶ್ವರ ಸ್ವಾಮಿಗಳು ಕೃಷಿಯಲ್ಲಿ ಸಾಧನೆ ಮಾಡಿರಬಹುದು ಆದರೆ ಅವರಿಗೆ ಗುರು ಬಸವಣ್ಣನವರ ತತ್ವಗಳ ಅರಿವಿನ ಕೊರತೆ ಇದೆ ಅರಿವುಳ್ಳವರು ಅವರಿಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಅರಿವಿಲ್ಲದವರಿಗೆ ಅರಿವುಳ್ಳವರು ಅರಿವನ್ನು ಕೊಡಬೇಕೆ ಹೊರತು ವಿರೋಧ ಪ್ರತಿಭಟನೆ ಸಲ್ಲ...
Comments
Post a Comment